Tuesday, September 28, 2010

ಮನಸೇ ಮನಸೇ ಯಾಕೆ ಮನಸೇ ರಮಿಸೋ ಹಾಗೆ ನೀ ಕಾಡೋದು?

ಬೇಡವೆನಿಸಿದರೂ ಕೇಳಲಿಲ್ಲ
ಮನಸ್ಸು
ಚೂರು ಚೂರಾದ ಮನಸ್ಸಿನಲ್ಲಿ
ನೋವು ತುಂಬಿದ ಹೃದಯಗಳ
ಪ್ರೀತಿಯ ಆವೇಶಗಳಡಿಯಲಿ
ಹೇಳುತಿಹೆ ನಾ..............

ನಿನ್ನ ಕಳೆದುಹೋದ ಪ್ರೀತಿಯ ಕತೆಯನ್ನು
ತೈಲವರ್ಣದ ಆಕೃತಿಯಾಗಿ
ನನ್ನ ಮನದಲ್ಲಿರುವೆ
ಕಣ್ಣು ಮುಚ್ಚಿದಾಗ ಗೋಚರಿಸುವ
ಸ್ಪೂರ್ತಿಯಾಗಿರುವೆ ನೀ
ನನ್ನ ಬಾಳ ಬಂಧನದಲ್ಲಿ
ನೀ ಬರೆದ ಕಾದಂಬರಿಯಾಗಿ ಹರಡಿರುವೆ ಎಂದು ತಿಳಿದಿದ್ದೆ

ನಾನು ತಿಳಿದಿದ್ದೆ
ನಮ್ಮದು ಶೃಂಗಾರ ಕಾವ್ಯ ಎಂದು

ಆದರೆ

ಕಾವ್ಯದಂತೆ ಅರ್ಥವಾಗದೆ ಉಳಿದು ಬಿಟ್ಟೆಯಲ್ಲ
ನನ್ನ
ಮನಸ್ಸಿನ ಅಂತರಾಳಕ್ಕಿಳಿದು
ಈ ಕವನದ ಅಕ್ಷರವಾದೆಯಲ್ಲ
.................

No comments:

Post a Comment