ಮಾತು ಮರೆತೆ, ಮನಸು ಹೇಳುತಿದೆ,
ಮನಸ್ಸಲ್ಲೇ ಹುಟ್ಟಿದ ಮಧುರ ರಾಗ!
ನಿನಗೆ ಕೇಳಿಸದು - ನನ್ನೊಳಗಿದು ಅಳಿಸದು-
ಸೇರುವೆಯೆಂದು ನನ್ನ ಹೃದಯ!
ಆಕಸ್ಮಿಕವಾಗಿ ಮತ್ತೆ ನೀ ನನಗೆ ತೋರಿದ ಪ್ರೀತಿ
ನಿನ್ನ ಮಾತಿಲ್ಲಿನ, ಆ ತುಂಟತನದ ನಗುವಿನ ಭಾಷೆ,
ಇಂದು ನಿನ್ನ ಕಳೆದುಕೊಂಡ ನಾ
ಹೇಳದೆ, ಕೇಳದೆ ಹೋರಟು ಹೋಗಿರುವೆ ನೀ!
ಇದು ನನ್ನದು ತಪ್ಪುಭಾವನೆಯೇ ಎನೂ ತಿಳಿಯದು......
ಇದು ಪ್ರೇಮ ಕವಿತೆ!
ಸಂಜೆಯ ಹೊತ್ತಿನಲಿ, ಒಬ್ಬಳೆ ಕುಳಿತಿರುವೆ,
ನಿನ್ನ ನೆನಪಲ್ಲಿ!
ಚಳಿ ಜ್ವರವಿಲ್ಲದ ರೋಗ,
ಮನಸ್ಸಲ್ಲೇ ಹುಟ್ಟಿದ ಮಧುರ ರಾಗ!
ನಿನಗೆ ಕೇಳಿಸದು - ನನ್ನೊಳಗಿದು ಅಳಿಸದು-
ಎಷ್ಟು ಬರೆದರು ಮುಗಿಯದು!
ನನಗೆ ಗೊತ್ತಿರಲಿಲ್ಲ ಇಷ್ಟು ಹತ್ತಿರ ನೀ ಬಂದು-
ಸೇರುವೆಯೆಂದು ನನ್ನ ಹೃದಯ!
ಆಕಸ್ಮಿಕವಾಗಿ ಮತ್ತೆ ನೀ ನನಗೆ ತೋರಿದ ಪ್ರೀತಿ
ನೀ-ತೋರಿದೆ ಆ ಒಲವೆಲ್ಲಿ? !
ಮತ್ತೆ ಮತ್ತೆ, ನಿನ್ನ ನೋಡುವ ಆಸೆ,
ನಿನ್ನ ಮಾತಿಲ್ಲಿನ, ಆ ತುಂಟತನದ ನಗುವಿನ ಭಾಷೆ,
ಆ ನಿನ್ನ ಪ್ರೀತಿಯಿಂದ ಮಾಡುತಿದ್ದ ತಮಾಷೆ!
ಪ್ರಶ್ನೆಯಾಗಿ ಹೋದೆ? ಇದೇನು ನನ್ನ ಕನಸೇ?
ಇಂದು ನಿನ್ನ ಕಳೆದುಕೊಂಡ ನಾ
ಮಂಕಾದೆ, ಮಗುವಾದೆ, ನನ್ನೊಳಗೆ ನಾ ಏನಾದೆ?
ಹೇಳು ಮತ್ತೆ ಯಾವಾಗ ಬರುವೆ ನನ್ನ ಮನಕೆ
ಹೇಳದೆ, ಕೇಳದೆ ಹೋರಟು ಹೋಗಿರುವೆ ನೀ!
ಇದು ನನ್ನದು ತಪ್ಪುಭಾವನೆಯೇ ಎನೂ ತಿಳಿಯದು......
ನಿಮ್ಮ ಕವನಗಳು ತುಂಬಾ ಅದ್ಬುತವಾಗಿದ್ದು ತಮ್ಮ ಮನವನ್ನು ಕಲಕುತ್ತಿವೆ
ReplyDeleteಇಂತಿ ನಿಮ್ಮ ಪ್ರೀತಿಯ ಗೆಳೆಯ
ನಂದಿ ಜೆ. ಹೂವಿನಹೊಳೆ
ಚಿತ್ತಾರದುರ್ಗ.ಕಾಂ,ಮತ್ತು ಐಟಿಕನ್ನಡಿಗಸ್.ಕಾಂ
ಸಂಚಾಲಕ,ಅಧ್ಯಕ್ಷ-ಎನ್.ಎಸ್.ಯು.ಐ-ವಿಜಯ ಸಂಜೆ ಕಾಲೇಜ್ ಘಟಕ,
ಬೆಂಗಳೂರು-04 ,ದೂ:9035177234,hoovinahole.blogspot.com,